ಮಂಜಿನ ಹನಿಯಲ್ಲಿ ಒಮ್ಮೆ ಮಿಂದು ಹೋದುವರು

Tuesday 14 April 2015

ಒಲುಮೆಯ ಮುದ್ದುವಿಗೆ: ಪತ್ರ - ೨


ಪತ್ರ - ೨
--------------

ಒಲುಮೆಯ ಮುದ್ದುಗೆ,

ಮೊನ್ನೆ ಏನಾಯ್ತು ಗೊತ್ತಾನಿಮ್ಮನೆ ಹಾದಿಲಿ ನಡ್ಕೊಂಡ್ ಬರ್ತಿದ್ದೆ. ಬೆಳದಿಂಗಳ ಮುಂಜಾನೆತಣ್ಣನೆಯ ಬೆಳಗಿನ ಜಾವಚುಮು ಚುಮು ಚಳಿ. ಕಂಡಷ್ಟಗಲದ ಆಕಾಶಕ್ಕೆ ತಾನೊಬ್ಬನೆ ಸುಂದ್ರ ಅನ್ನೋ ಥರ ನಗ್ತಾ ಇದ್ದ ಚಂದಿರ. ಅರೆರೇ ಬೆಳಗಿನ ಜಾವಕ್ಕೂ ಇದ್ದಾನಲ್ಲಾ ಪೋಲಿನಿನ್ನ ಕದಿಯುವ ಸಾಹಸಕ್ಕೆ ಕೈಹಾಕಿರಬಹುದೇ ಅಂತ ಅನುಮಾನ ಬಂತು. ಆದರೆ ನೀನು ನನ್ನವಳೆಂಬ ಆಸರೆಯೊಂದೇ ನನ್ನ ಮುಂದುವರೆಯುವಂತೆ ಮಾಡಿದ್ದು. ಹಾಲ್ನೊರೆ ಉಕ್ಕುಕ್ಕಿ ಭೂಮಿಯ ಮೇಲೆಲ್ಲಾ ಸುರೀತಿದ್ದ. ನಂಗೆ ಆಶ್ಚರ್ಯವೋ ಆಶ್ಚರ್ಯ! ಅಲ್ಲಾ ಇಷ್ಟೆಲ್ಲಾ ಹಾಲ್ನೊರೆ ಸುರೀತಿದ್ದಾನೆ, ’ನಂದಿನಿ ಡೈರಿಯವ್ರು ಹಾಲಿನ್ ರೇಟ್ ಕಮ್ಮಿ ಮಾಡ್ತಾರ ಅಂತ.

ನಾನು ಮುಂದಡಿ ಇಟ್ಟಂತೆಲ್ಲಾ ಅವ್ನೂ ಓಡ್ತಿದ್ದ. ಎಲಾ ಇವ್ನಾ ಯಾಕೋ ಓಡ್ತೀಯಾ ಅಂತ ಅಟ್ಟುಸ್ಕೊಂಡ್ ಹೋದೆ. ನಿಮ್ಮನೆಯಿಂದ ಆ ಗಣಪತಿ ದೇವಸ್ಥಾನ ದಾಟಿಅದ್ರು ಎದುರಿಗಿನ ಪಾರ್ಕು ದಾಟಿಉದ್ದುದ್ದ ರಸ್ತೆ ಬಿಟ್ಟು ಅಂಕುಡೊಂಕನ್ನೆ ಬಳಸುತಾನೆ. ನನ್ಗೂ ಮಾರ್ನಿಂಗ್ ಜಾಗ್ ಆದೀತೆಂದು ಓಡಿದೆಓಡಿದೆ. ಎದುರಿಗೆ ರಾಘವೇಂದ್ರ ಕನ್ವೆನ್ಶನ್ ಹಾಲ್ ಸಿಕ್ತು. ಮೇಲ್ ನೋಡಿದ್ರೆ ಅವ ಇಲ್ಲ. ನನಗೆ ದಾರಿ ಬಿಟ್ಟು ಓಡಿ ಹೋಗಿದ್ದ. ಸಾಕಷ್ಟು ಕನಸುಗಳನ್ನು ಕೊಟ್ಟು.

ನಾನೀಗಅವನ ಮೇಲೆ ನನಗ್ಯಾಕಿಷ್ಟು ಅಸೂಯೆಅವ ನಿನ್ನ ನಿಜಕ್ಕೂ ಕದೀತಿದ್ನಅವನಿಗಷ್ಟು ಧೈರ್ಯವೇನನ್ನ ನಾನೇ ಪ್ರಶ್ನಿಸಿಕೊಳ್ತೇನೆ. ಇಲ್ಲ ಇಲ್ಲ.. ನೀನು ನನ್ನವಳೆಂದುನಾನು ನಿನ್ನವನೆಂದು ನಮ್ಮೆದೆಗಳ ಮೇಲೆ ಕೆತ್ತಿಟ್ಟಾಗಿದೆ! ಆದರೂ ನನಗ್ಯಾಕೆ ನಿನ್ನ ಕಳೆದುಕೊಳ್ಳುವ ಭಯಈ ಬೆಳಗಿನ ಜಾವಕ್ಕೆ ಈ ಪ್ರಶ್ನೆಯೊಂದು ನನ್ನನ್ಯಾಕೆ ನನ್ನಿಂದ ಕಸಿಯುತಿದೆಯೋಚಿಸುತ್ತಾ ಕೂತಿದ್ದೆ. ಆಗ ಹೊಳೆಯಿತುಈ ಥರ ಅನುಭವಿಸಿದ್ದ ಯಾವನೋ ಪುಣ್ಯಾತ್ಮ ಹೇಳಿದ್ದ, "ಶೀ ವಿಲ್ ನೆವರ್ ಬಿ ಯುವರ್ಸ್ಅಂಟಿಲ್ ಯೂ ಫೀಲ್ ಜಲಸ್". ಹೌದುಒಂದು ಕ್ಷಣಕ್ಕೂ ನಾನಿನ್ನ ಕಳೆದುಕೊಳ್ಳಲಾರೆ. ಆ ಚಂದಿರನಂತು ಮಳ್ಳಅಮಾವಾಸ್ಯೆಗೂ ಬೆಳದಿಂಗಳಾಚರಿಸುವ ಅತಿ ಆಸೆಗೆ ಸದಾ ಜಿನುಗುವ ನಿನ್ನ ಕಣ್ಣ ಹೊಳಪ ಕದ್ದೊಯ್ದು ಬಿಡುತ್ತಾನೆ. ನಾನಂತೂ ಸದಾ ಕಾವಲಿಗಿದ್ದೇನೆದೀಪಗಳನೇ ಖರೀದಿಸದ ನನಗೆ ನಿನ್ನ ಕಣ್ಣ ಹೊಳಪಷ್ಟೇ ಆಸರೆ.

ಎಂದಿಗೂ ನಿನ್ನವನೇ ಆದ,
ಪ್ರಸಾದ್ (ನಿನ್ನ ಮೈಸೂರು)

1 comment:

  1. ಭೇಷ್ ಪ್ರೇಮಿ,
    ಚಂದ್ರ ಬಾರದ ಇರುಳ ಕತ್ತಲಲೂ ಆಕೆಯ ಬೆಳದಿಂಗಳನು ಬೆಳಗುವ ಒಲುಮೆ...

    ReplyDelete