ಮಂಜಿನ ಹನಿಯಲ್ಲಿ ಒಮ್ಮೆ ಮಿಂದು ಹೋದುವರು

Tuesday 14 April 2015

ಒಲುಮೆಯ ಮುದ್ದುವಿಗೆ: ಪತ್ರ - ೬


ಪತ್ರ - ೬
----------

ಒಲುಮೆಯ ಮುದ್ದುಗೆ,

ನಿನ್ನಲ್ಲೇನೋ ಸಮ್ಮೋಹಿನಿ ವಿದ್ಯೆಯಿರಬಹುದು ಕಣೇ. ಈ ಒಂದು ಕ್ಷಣ ಕ್ಷಣಕೂ ನಾನು ನೀನಾಗಿಬಿಡುವ ತವಕನಾವಾಗಿಬಿಡುವ ಕಾತರ. ನೀನು ನಂಬುವುದಿಲ್ಲಯಾರ್ಯಾರ ಕಣ್ಣಲ್ಲೋ ನೀನು ಕಾಣುವುದಿದೆಈ ಥರದ ಭ್ರಮೆಗೆ ಅದೇನೆನ್ನುವರೋನನಗೆ ಮಾತ್ರ ತೀರದ ಚಡಪಡಿಕೆ. ಒಮ್ಮೆ ಕನ್ನಡಿಯ ಮುಂದೆ ನಿಲ್ಲುತ್ತೇನೆಕನ್ನಡಿಯೊಳಗಿನ ನಿನ್ನ ಪ್ರತಿಫಲನದ ಕಣ್ಣೊಳಗೂ ನೀನೇ ಕಾಣುವಾಗ ನಾನದೆಷ್ಟು ಹಾಳಾಗಿರಬೇಡನೀನೇ ಊಹಿಸು! ನಿನ್ನ ಪ್ರೇಮದಮಲೊಳಗೆ ಮುಳುಗೇಳುವಆ ಹುಚ್ಚು ಹೊಳೆಯೊಳಗೆ ತೇಲಿ ಹೋಗುವ ಧ್ಯಾನ ನನಗೆ. ನನ್ನ ಮನಸುಭಾವ ಮತ್ತು ಎಲ್ಲವನ್ನೂ ನಿನ್ನೊಂದು ನೋಟಮಾತುಸ್ಪರ್ಶಹಾವಭಾವಗಳು ನಿಯಂತ್ರಿಸುತ್ತವೆ. ನಾನು ನನ್ನ ನಿಯಂತ್ರಣದಲ್ಲೇ ಇಲ್ಲಎಂಥ ತಮಾಶೆ ನೋಡುಈ ಮೋಹದ ಕಾಯಿಲೆಗೆ ನಿನ್ನ ಒಪ್ಪಿಗೆಯೊಂದೇ ದಿವ್ಯೌಷಧವೆಂದು ಮನವರಿಕೆಯಾಗಿದೆ. ನನ್ನ ಈ ಬಲೆಯಿಂದ ಪಾರು ಮಾಡ್ತೀಯಾ?

ಈ ಪತ್ರ ಬರಿವಾಗ ನಿನ್ನ ಕಣ್ಣುಗಳನ್ನೇ ದಿಟ್ಟಿಸುತ್ತಾ ಕೂತಿದ್ದೇನೆ. ಅಕ್ಷರಗಳೆಲ್ಲಾ ತಡವರಿಸಿ ಬೀಳುತ್ತಿವೆಪದಗಳು ನೀರಸ ಅನ್ನುಸ್ತಿವೆ. ನಾಳಿನ ಕನಸುಗಳಿಗೆ ಪುಳಕಗೊಳ್ಳುತ್ತಾಪತ್ರವನ್ನು ಮುಗಿಸುತ್ತಿದ್ದೇನೆ. ನನಸುಗಳು ಕನಸುಗಳಿಗಿಂತ ರುಚಿಕಟ್ಟಾಗುವ ಕ್ಷಣಗಳಿಗೆ ಜಾತಕ ಪಕ್ಷಿಯಾಗಿದ್ದೇನೆ.

ಎಂದಿಗೂ ನಿನ್ನವನೇ ಆದ,
ಪ್ರಸಾದ್ (ನಿನ್ನ ಮೈಸೂರು)

No comments:

Post a Comment