ಮಂಜಿನ ಹನಿಯಲ್ಲಿ ಒಮ್ಮೆ ಮಿಂದು ಹೋದುವರು

Tuesday 14 April 2015

ಒಲುಮೆಯ ಮುದ್ದುವಿಗೆ: ಪತ್ರ - ೭


ಪತ್ರ - ೭
--------

ಒಲುಮೆಯ ಮುದ್ದುಗೆ,

ನಿನ್ನ ಸಾನಿಧ್ಯದಲ್ಲಿ ಕರಗುತ್ತಿರುವ ಮೌನದೊಳಗೆಕಣ್ಣ ಭಾಷೆಯ ರುಚಿಕಟ್ಟು ಊಟವನು ಸವಿದ ಹೃದಯದ ಹಸಿವು ಕುಡಿದಷ್ಟೂ ಇಂಗುತ್ತಿಲ್ಲ. ಒಲವಿಗೆ ಮಾತುಮೌನಗಳ ಹಂಗಿಲ್ಲ. ಹಾಗೆ ನೋಡುವುದಾದರೆ ನಿನ್ನ ಹೃದಯದೊಳಗೆ ಕಂಡ ಅಷ್ಟೂ ಕಾವ್ಯದ ಮುಂದೆ ನನ್ನ ಪತ್ರಗಳೂ ನೀರಸ. ಜೀವಂತ ಕಾವ್ಯದ ಮುಂದೆ ಶರಣಾಗುತ್ತಿದ್ದೇನೆಒಲವ ಪರಿಭಾಷೆಯನ್ನು ನಿನ್ನಿಂದ ಕದಿಯುವ ಅತಿಯಾಸೆಯಿಂದ.

ಪತ್ರಗಳ ಕಡೆಗಾದರೂ ಹೇಳಿ ಬಿಡುತ್ತೇನೆ, 'ಐ ಲವ್ ಯೂ ಮುದ್ದುಲವ್ ಯೂ ಮೋರ್ ದ್ಯಾನ್ ಎನಿ ಒನ್ ಆನ್ ದಿಸ್ ಯೂನಿವರ್ಸ್...ಭುಜಕ್ಕೊರಗಿರುವ ನಿನಗೆ ಮೆತ್ತನೆ ಹಾಸಿಗೆಯಿದೆ ಎದೆಯೊಳಗೆಮಲಗೆನ್ನ ಮನದೊಡತಿಎದೆಯ ಬಡಿತವೇ ನಿನಗೆ 'ಜೋ ಜೋ ಲಾಲಿ'..<3

ಎಂದಿಗೂ ನಿನ್ನವನೇ ಆದ,
ಪ್ರಸಾದ್ (ನಿನ್ನ ಮೈಸೂರು)

ಒಟ್ಟು ಏಳು ಪತ್ರಗಳು ಫೆಬ್ರವರಿಯಲ್ಲಿ ’ಅವಳ’ನ್ನು ತಲುಪಿವೆ :-)

ಒಲುಮೆಯ ಮುದ್ದುವಿಗೆ: ಪತ್ರ - ೬


ಪತ್ರ - ೬
----------

ಒಲುಮೆಯ ಮುದ್ದುಗೆ,

ನಿನ್ನಲ್ಲೇನೋ ಸಮ್ಮೋಹಿನಿ ವಿದ್ಯೆಯಿರಬಹುದು ಕಣೇ. ಈ ಒಂದು ಕ್ಷಣ ಕ್ಷಣಕೂ ನಾನು ನೀನಾಗಿಬಿಡುವ ತವಕನಾವಾಗಿಬಿಡುವ ಕಾತರ. ನೀನು ನಂಬುವುದಿಲ್ಲಯಾರ್ಯಾರ ಕಣ್ಣಲ್ಲೋ ನೀನು ಕಾಣುವುದಿದೆಈ ಥರದ ಭ್ರಮೆಗೆ ಅದೇನೆನ್ನುವರೋನನಗೆ ಮಾತ್ರ ತೀರದ ಚಡಪಡಿಕೆ. ಒಮ್ಮೆ ಕನ್ನಡಿಯ ಮುಂದೆ ನಿಲ್ಲುತ್ತೇನೆಕನ್ನಡಿಯೊಳಗಿನ ನಿನ್ನ ಪ್ರತಿಫಲನದ ಕಣ್ಣೊಳಗೂ ನೀನೇ ಕಾಣುವಾಗ ನಾನದೆಷ್ಟು ಹಾಳಾಗಿರಬೇಡನೀನೇ ಊಹಿಸು! ನಿನ್ನ ಪ್ರೇಮದಮಲೊಳಗೆ ಮುಳುಗೇಳುವಆ ಹುಚ್ಚು ಹೊಳೆಯೊಳಗೆ ತೇಲಿ ಹೋಗುವ ಧ್ಯಾನ ನನಗೆ. ನನ್ನ ಮನಸುಭಾವ ಮತ್ತು ಎಲ್ಲವನ್ನೂ ನಿನ್ನೊಂದು ನೋಟಮಾತುಸ್ಪರ್ಶಹಾವಭಾವಗಳು ನಿಯಂತ್ರಿಸುತ್ತವೆ. ನಾನು ನನ್ನ ನಿಯಂತ್ರಣದಲ್ಲೇ ಇಲ್ಲಎಂಥ ತಮಾಶೆ ನೋಡುಈ ಮೋಹದ ಕಾಯಿಲೆಗೆ ನಿನ್ನ ಒಪ್ಪಿಗೆಯೊಂದೇ ದಿವ್ಯೌಷಧವೆಂದು ಮನವರಿಕೆಯಾಗಿದೆ. ನನ್ನ ಈ ಬಲೆಯಿಂದ ಪಾರು ಮಾಡ್ತೀಯಾ?

ಈ ಪತ್ರ ಬರಿವಾಗ ನಿನ್ನ ಕಣ್ಣುಗಳನ್ನೇ ದಿಟ್ಟಿಸುತ್ತಾ ಕೂತಿದ್ದೇನೆ. ಅಕ್ಷರಗಳೆಲ್ಲಾ ತಡವರಿಸಿ ಬೀಳುತ್ತಿವೆಪದಗಳು ನೀರಸ ಅನ್ನುಸ್ತಿವೆ. ನಾಳಿನ ಕನಸುಗಳಿಗೆ ಪುಳಕಗೊಳ್ಳುತ್ತಾಪತ್ರವನ್ನು ಮುಗಿಸುತ್ತಿದ್ದೇನೆ. ನನಸುಗಳು ಕನಸುಗಳಿಗಿಂತ ರುಚಿಕಟ್ಟಾಗುವ ಕ್ಷಣಗಳಿಗೆ ಜಾತಕ ಪಕ್ಷಿಯಾಗಿದ್ದೇನೆ.

ಎಂದಿಗೂ ನಿನ್ನವನೇ ಆದ,
ಪ್ರಸಾದ್ (ನಿನ್ನ ಮೈಸೂರು)

ಒಲುಮೆಯ ಮುದ್ದುವಿಗೆ: ಪತ್ರ - ೫


ಪತ್ರ - ೫
----------

ಒಲುಮೆಯ ಮುದ್ದುಗೆ,

ಇತ್ತೀಚೆಗೆ ಕನಸುಗಳು ಬೀಳ್ತವೆ ಕಣೆಎಷ್ಟ್ ಚೆನ್ನಾಗಿರ್ತವೆ ಗೊತ್ತಾನಂಗೆ ಪ್ರಾಣಿಗಳು ಅಂದ್ರೆ ಅಷ್ಟೇನೂ ಅಕ್ಕರೆ ಇಲ್ಲ ಮತ್ತೆ ಚಿಕ್ಕೋನಿದ್ದಾಗ ಅದ್ಯಾವ್ದೋ ಗೌಜಲಕ್ಕಿ ಮರಿನ ಹಿಡ್ಕೊಂಡ್ ಬಂದು ಸಾಕ್ತೀನಿ ಅಂತ ಸಾಯ್ಸಿದ್ದೆ. ಅದೆಲ್ಲೋ ಒಂಟಿಯಾಗಿದೆ ಮುದ್ದಾದ್ ನಾಯಿ ಮರಿ ಅಂತ ಎತ್ಕೊಂಡ್ ಬಂದು ಸಾಕ್ತೀನಿ ಅಂತ ಆಟ ಕಟ್ಟಿ ಎರ್ಡ್ಮೂರ್ ದಿನ ಊಟ ಹಾಕಿ ನಮ್ ದೊಡ್ಡಮ್ಮ ನಂಗೇ ಗೊತ್ತಿಲ್ದಂಗೆ ಅದ್ರು ಕಟ್ಟು ಬಿಚ್ಚಿ ಊರಾಚೆ ಬಿಟ್ಟು ಬಂದಾಗ ಜೋರಾಗಿ ಕಿರ್ಚಾಡಿ ಅತ್ತಿದ್ದೆ. ಮತ್ತೊಂದ್ಸಲ ಊರಲ್ಲಿರೋ ಮನೆಯ ಹಂಚಿನ ಸಂದಿಲಿ ಗೂಡು ಕಟ್ಟಿ ಮೊಟ್ಟೆಯಿಟ್ಟಿದ್ದ ಅದ್ಯಾವುದೋ ಹಕ್ಕಿಯ ಗೂಡನ್ನು ಮೊಟ್ಟೆಗಳ ಸಮೇತ ಎಗರಿಸಿಕೊಂಡುಬೆಂಕಿ ಹತ್ರ ಕಾವು ಕೊಟ್ಟು ಮರಿಯಾಗುತ್ತಾ ಅಂತ ಕಾಯ್ತಾ ಕೂತಿದ್ದೆ. ಇನ್ನು ತಿಟ್ಟಲ್ಲಿ ನವಿಲು ಬರ್ತವಂತೆ ಅಂತ ನಮ್ಮೂರ್ ಸತೀಶ ಹೇಳ್ದಾಗ ಅವುಗಳ್ನ ಹಿಡ್ಕೊಂಡ್ ಬಂದ್ ಸಾಕೊಳೋಣ ಅಂತ ಅವುಗಳನ್ನ ಹಿಡಿಯೋಕ್ಹೊಗಿ ತರಚು ಗಾಯಗಳ್ನ ಮಾಡ್ಕೊಂಡಿದ್ದೆ. ಹೀಗೆ ನನ್ ಹುಚ್ಚಾಟಗಳಿಂದ ಮನವರಿಕೆಯಾಗಿದ್ದುನಂಗೆ ಪ್ರಾಣಿಗಳನ್ನ ಸಾಕ್ಬೇಕು ಅನ್ನೋ ಆಸೆಗಿಂತ ಅವುಗಳೊಂದಿಗಿನ ಒಡನಾಟದ ಕುತೂಹಲವಿತ್ತೇನೋಇತ್ತೀಚೆಗೆ ನನ್ ಸೋಮಾರಿತನ ಅವುಗಳನ್ನೆಲ್ಲಾ ನಿಗ್ರಹಿಸಿಬಿಟ್ಟಿದೆನನ್ನ ಚೈತನ್ಯ ಶಕ್ತಿಯಾಗಿ ನೀನೊಬ್ಳಿಲ್ದಿದ್ರೆಬದ್ಕೋದೂ ಬೋರನ್ಸಿರೋದು! :-D

ಈಗ ವಿಷಯಕ್ಕೆ ಬರ್ತೀನಿ ನನ್ ಕನಸಲ್ಲಿನಾವೆಲ್ಲಾ ಇದ್ವಿ. ಅಂದ್ರೆ ನಾನುಅಪ್ಪಜಿಮಮ್ಮಿಪ್ರಮೋದ ಮತ್ತೆ ನೀನು. ಮೋಸ್ಟ್ಲಿ ಮದ್ವೆ ಆಗಿತ್ತು ಅನ್ಸುತ್ತೆ. ಇಲ್ದಿದ್ರೆ ನೀನೆಲ್ಲಿ ನಮ್ ಮನೇಲಿರ್ತಿದ್ದೆ. ಆಗ ನಮ್ಗಳ ಜೊತೆ ಒಂದು ಲ್ಯಾಬ್ರಡಾರ್ ನಾಯಿ ಮತ್ತೆ ಬಿಳಿ ಬೆಕ್ಕುಗಳೂ ಇದ್ವು. ನಮ್ಮನೆಲಿ ಪ್ರಾಣಿಗಳನ್ನ ಸಾಕೋಕೆ ಏನಾದ್ರೂ ಕೊಂಕು ತೆಗ್ಯೋ ಮಮ್ಮಿಅಸಡ್ಡೆ ತೋರ್ಸೋ ಅಪ್ಪಜಿ ಎಲ್ರೂ ಆ ಪ್ರಾಣಿಗಳನ್ನ ಸಾಕೊಳೋಕೆ ಹೆಂಗ್ ಒಪ್ಕೊಂಡ್ರುನಾನು ಯೋಚ್ನೆ ಮಾಡ್ತೀನಿ ಈಗ.
ನಿಂಗೆ ಇನ್ನೊಂದ್ ಅಚ್ಚರಿ ವಿಷ್ಯ ಹೇಳ್ಬೇಕುಆ ನಾಯಿ ಮತ್ತು ಬೆಕ್ಕುಗಳು ನೀನವತ್ತು ಬೆಳದಿಂಗಳ ರಾತ್ರಿಲಿ ನನ್ ಮಡಿಲಲ್ಲಿ ತಲೆಯಿಟ್ಟು ಹೇಳಿದ್ಯಲ್ಲಾನಿಮ್ ಪಕ್ಕದ್ ಮನೆಯಿಂದ ಕಾಣೆಯಾಗಿವೆ ನಾಯಿಬೆಕ್ಕು ಅಂತ.. ಥೇಟ್ ಹಾಗೇ ಇದ್ವು. ಮೋಸ್ಟ್ಲಿ ನಿನ್ಗೆ ಅದೆಲ್ಲಾ ಇಷ್ಟ ಅಂತನೇ ಮನೆಯವ್ರೆಲ್ಲಾ ಸಾಕೋಕೆ ಒಪ್ಕೊಂಡಿರ್ಬೇಕಲ್ವಾ ಮುದ್ದುನೋಡಿದ್ಯಾ ನಮ್ಮನೆ ಅಂದ್ರೆ ಹೀಗೆಯಾವುದೇ ವಿಷಯ ತಗೊಂಡ್ರೂ ಮೂರ್ ಮೂರ್ ದಿಕ್ಕಲ್ಲಿ ಯೋಚ್ನೆ ಮಾಡ್ತೀವಿ. ಪ್ರೀತಿ ವಿಷ್ಯ ಬಂದ್ರೆ ಮಾತ್ರ ಒಂದೇ ಮಂತ್ರಒಂದೇ ದಿಕ್ಕು. ಈ ದಿನ ನಿನ್ಗೊಂದು ಪ್ರಾಮಿಸ್ ಮಾಡ್ತಿದ್ದೀನಿಪ್ರಪಂಚದ ಪ್ರೀತಿಯನ್ನೆಲ್ಲಾ ನಿನ್ನ ಮಡಿಲಿಗೆ ಸುರಿಯುವ ನಾನುನನ್ನ ಜಗತ್ತಿಗೆ ನಿನ್ನ ರಾಣಿಯಾಗುಸ್ತೀನಿನಿನ್ನ ಪುಟ್ಟ ಜಗತ್ತೊಳಗೆ ನನ್ನನ್ನೊಂದು ಭಾಗವಾಗಿಸ್ಕೋತೀಯಾ? :-)

ಎಂದಿಗೂ ನಿನ್ನವನೇ ಆದ,
ಪ್ರಸಾದ್ (ನಿನ್ನ ಮೈಸೂರು)

ಒಲುಮೆಯ ಮುದ್ದುವಿಗೆ: ಪತ್ರ - ೪


ಪತ್ರ - ೪
-----------

ಒಲುಮೆಯ ಮುದ್ದುಗೆ,

ಅರಿವಾಗದ ಮೌನದೊಳುಹರಿವ ಧ್ಯಾನದೊಳುನಿನ್ನೊಲವಿನೊರತೆ ಹೃದಯದಿಂದ ಚಿಗಿದುಪುಟಿದು ಕಳೆಗಟ್ಟುತ್ತಿದೆ. ಜಿನುಗಿದ ಒಲವನ್ನು ಚೇಸು ಮಾಡುವ ಧಾವಂತಕ್ಕೆ ಬೀಳುತ್ತೇನೆ. ಆಹಾ! ನನ್ನ ಚಲನೆಯನ್ನು ನಿನಗೆ ನಿರೂಪಿಸುವೆ ಕೇಳುಮಜವಿದೆ. ನಿನ್ನ ಕಣ್ಣೊಳಗಿಂದ ಪುಟಿದ ಒಲವು ಗುಂಡಗೆ ಗೋಳಾಕಾರ ಪಡೆಯುತ್ತದೆಉರುಳುತ್ತದೆ. ಒಂದು ಆಯಕಟ್ಟಿನ ಜಾಗ ನೋಡಿ ತಣ್ಣಗೆ ನಿಂತುಬಿಡುತ್ತದೆ. 'ನನಗೊಂದು ಕೋಲು ಕೊಡಿಭೂಮಿಯನ್ನು ಉರುಳಿಸುತ್ತೇನೆಎಂದ ಆರ್ಕಿಮಿಡೀಸ್ ಒಂದು ರೀತಿಯ ಬೆರಗು ಹುಟ್ಟಿಸುತ್ತಾನೆ. ನಾನೂ ಒಲವನ್ನು ನಡೆಸಲು ಸನ್ನೆ ಹುಡುಕುವೆಆಗ ನಡೆದ ಅಚ್ಚರಿಗಳ ಒಟ್ಟು ಮೊತ್ತವೇ ಈ ಪತ್ರ. ಸ್ವಲ್ಪ ಕಾವ್ಯಾತ್ಮಕವಾಗಿಸಲು ಪ್ರಯತ್ನಿಸಿದ್ದೇನೆನನ್ನ ಆರ್ಟಿಫಿಶಿಯಲ್ ಭಾಷೆಯನ್ನು ಸಹಿಸಿಕೋ!

ಆ ಗೋಳಾಕಾರದ ಒಲವು ಥೇಟು ಸಕ್ಕರೆ ಪಾಕದಲದ್ದಿದಂತೆ ಸವಿಪಾಕವನ್ನು ಸುರಿಸುತ್ತಿದೆ. ನಿಂತ ನಿಲುವಲ್ಲೇ ಕರಗುವ ಐಸ್ಕ್ರೀಮಿನಂತೆ. ಅಲ್ಲಿಂದ್ಹೊರಟ ಒಂದು ಬಿಂದು ಉರುಳಿಉರುಳಿ ಬಿದ್ದು ಕುಡಿಯೊಡೆದು ಹೂವಾಗುತ್ತದೆಹೂವು ಸಿಹಿಯಾಗುತ್ತದೆ. ನಿರ್ಜೀವ ಹೂವು ಫಳ ಫಳ ಹೊಳೆದುಗಾಳಿಗೆ ಗಂಧ ಪೂಸಿಮದುವಣಗಿತ್ತಿಯಾಗಿದೆ. ಚಕಿತ ಕ್ಷಣಗಳ ಹಿಡಿಯಲಾಗದೆಮನ ಚೂರು ಹೊಡೆದು ಬಣ್ಣವಾಗಿದುಂಬಿಚಿಟ್ಟೆಯಾಗಿ ಹೂವನ್ನು ಮುತ್ತುತ್ತಿದೆ. ಮೈಲಿಗೆಯ ಮಿತಿ ಮೀರಿದ ಇದಕೆ ವಿಜ್ಞಾನಿಗಳು ಪರಾಗವೆಂದು ಕರೆದುಬಿಟ್ಟರು. ಹುಟ್ಟುಗಳಿಗೊಂದ್ಹುಟ್ಟು ಕೊಟ್ಟ ಗೋಳ ತನ್ನ ಕಣ್ಣೊರಳಿಸುತ್ತಿದೆ. ಪರಾಗ ನಿರಂತರ ಮತ್ತು ನಿರಾತಂಕ! ಹೂವಿನ ಜಾಡು ಅರಸಿ ಹಾರಿ ಬರುವ ಪಕ್ಷಿಗಳಿಗೂ ಚಿಲಿಪಿಲಿಗುಟ್ಟುವುದನ್ನು ಕಲಿಸುತ್ತಿದೆ ಹೂವ ಗಂಧ. ಒಂದರ ಹೂವ ಕೇಸರಗಳು ಮತ್ತೊಂದಕೆ ಬೆಸೆದು ತರಹೇವಾರಿ ಹೂವುಗಳು ಜೀವತಳೆಯುತ್ತವೆ. ಬಣ್ಣಗಳು ಭಾವತಳೆಯುತ್ತವೆ. ಭೂಮಿ ಜೀವಂತವಾಗುತ್ತದೆ.

ನಿನಗೊಂದು ನಿಜ ಗೊತ್ತಾ ಮುದ್ದುಎಲ್ರೂ ಹೇಳ್ತಾರೆಭೂಮಿ ನಿಂತಿರೋದೆ ಗುರುತ್ವದ ಮೇಲೆಇನ್ನೂ ಕೆಲವರು ಹೇಳ್ತಾರೆ ಭೂಮಿ ನಿಂತಿರೋದು ನಂಬಿಕೆ ಮೇಲೆನಾನು ಹೇಳ್ತೇನೆ, 'ಈ ದುಂಡಾದ ಭೂಮಿ ನಿಂತರೋದು ನಿನ್ನೊಲವ ಮೇಲೆ', ಅದರ ಸೃಷ್ಟಿಯ ಕಾರಣವೂ ನಿನ್ನೊಲವೇಗುಂಡಾದ ಒಲವ ಚಲನೆಗೂ ನಿನ್ನ ಕಣ್ಣೋಟವೇ ಸನ್ನೆ. ಅಷ್ಟೂ ಒಲವನ್ನು ನನ್ನೆದೆಯೊಳಗೆ ಬಚ್ಚಿಟ್ಟುಜೀವನ ಪರ್ಯಂತ ನಿನಗೆ ಎಡೆಯಿಡುತ್ತಿದ್ದೇನೆ. ನಿನ್ನ ಕನಸುಗಳಿಗೆ ರೆಕ್ಕೆಯಾಗುತಿದ್ದೇನೆಸ್ವೀಕರಿಸೆನ್ನ ಒಲವ ಪೂಜೆಗೆ.

ಎಂದೆಂದೂ ನಿನ್ನವನೇ ಆದ,
ಪ್ರಸಾದ್ (ನಿನ್ನ ಮೈಸೂರು)

ಒಲುಮೆಯ ಮುದ್ದುವಿಗೆ: ಪತ್ರ - ೩


ಪತ್ರ - ೩
-------------

ಒಲುಮೆಯ ಮುದ್ದುಗೆ,

ನೆನ್ನೆ ಯಾಕ್ ಪತ್ರ ಬರೀಲಿಲ್ಲ ಗೊತ್ತಾ ನಿಂಗೆನಾನೊಬ್ಬ ನಿಂಗೋಸ್ಕರ ಕಾಯ್ತಿರ್ತೀನಿ ಅನ್ನೋ ನೆನಪಾದ್ರೂ ಇದ್ಯಾಮೊನ್ನೆ ರಾತ್ರಿ ಎಲ್ಲಾ ಕಾಲ್ ಮಾಡಿ ಸತ್ತಿದ್ದೀನಿಎಷ್ಟ್ ಸಲ ರಿಂಗಾದ್ರೂ ಎತ್ತೋರೇ ಇಲ್ಲ. ಎಲ್ ಹೊಗಿದ್ದೆ ನೀನುಎಷ್ಟ್ ಶತಪಥ ಹಾಕಿದ್ದೀನಿಬೆಳಗಿನ ಜಾವ ನಾಲ್ಕಾದ್ರೂ ನಿದ್ದೆನೇ ಇಲ್ಲ ಈ ಹಾಳಾದ್ ಕಣ್ಣಿಗೆ. ನೀನು ಆರಾಮಾಗಿ ಬಿದ್ಕೊಂಡಿದ್ದೆ ಅಲ್ವಾನಿದ್ದೆ ಬರದ ಆ ಕ್ಷಣಗಳಲಿ ಏನ್ ಮಾಡ್ಲಿ ಅಂತ ತಿಳೀದೆ ನೀನು ನನಗಾಗಿ ಕೊಟ್ಟ ಆ ಕೃಷ್ಣನ ಪೇಂಟಿಂಗ್ ನೋಡ್ತಾ ಕಾಲ ಕಳ್ದಿದ್ದೀನಿ. ಅವ್ನನ್ನ ನೋಡಿದಷ್ಟೂ ನಿನ್ನ ನೆನಪಾಗಿ ಕಣ್ಣೆಲ್ಲಾ ಹನಿಗೂಡ್ತಿತ್ತು. ಅಳ್ತಿರ್ಲಿಲ್ಲ ಆದ್ರೆ ಆ ಭಾವಕ್ಕೇನಂತ ಕರಿಬೇಕೋ ಗೊತ್ತಿಲ್ಲಏನಂತ ಕರಿಬೋದು ಮುದ್ದು ಅದನ್ನಾನಿನ್ ಉತ್ರ ಏನೂಂತ ಗೊತ್ತು ಬಿಡು, ’ಏನೂ ಇಲ್ಲ’ ಹಂಗಂದ್ರೆ, ’ಗೊತ್ತಿಲ್ಲ’, ಏನಿಲ್ಲ ಅಂದ್ರೆ, ’ಏನೇನೂ ಇಲ್ಲ!’.

ನಿನ್ನ ಸವಿನುಡಿಗೆ ಮುದಗೊಳ್ಳದೆಕಿವಿಯ ಮೇಲೆಲ್ಲಾ ಜೇನು ಸುರಿಯದೆಕಿವಿ ಸುತ್ತಾ ಇರುವೆಗಳು ಮುತ್ತದೆಮನಸಿನ ತುಂಬ ಮಲ್ಲಿಗೆಸಂಪಿಗೆಜಾಜಿಸೇವಂತಿಗೆಸೂರ್ಯಕಾಂತಿಕೇದಿಗೆಯ ಮೊಗ್ಗುಗಳರಳದೆನವಿರಾಗಿ ನರಳದೆಸಾವಿರ ಜೀವದ ಮೇಳ ಕಟ್ಟುವ ಕನಸು ಕಂಗಳು ನನ್ನ ನೋಡದೆಸಾವೂ ಬರದೆ ಜೀವಂತವಿರುವ ನರಕ ನಿನಗ್ಹೇಗೆ ಗೊತ್ತು ಹೇಳುನಾನು ಇದನ್ನೆಲ್ಲಾ ಹೇಳುವಾಗ, ’ಇವನ್ನೆಲ್ಲಾ ನಿನ್ನ ಕಥೆಕವನಗಳಿಗಿಟ್ಕೋನನ್ಹತ್ರ ಹೇಳ್ಬೇಡ’ ಅಂತಂದ್ಬಿಡ್ತಿ. ಆದರೆ ನಿಜಕ್ಕೂ ನನಗೆ ಹೀಗನಿಸುವುದು ನಿನಗೂ ಗೊತ್ತಿರುತ್ತೆ ಅಲ್ವಾಆದ್ರೂ ಯಾಕ್ ಸತಾಯಿಸ್ಬೇಕು?

ನಿದ್ದೆ ಬರದಿದ್ದೆ ಒಳ್ಳೆದಾಯ್ತೇನೋ ನೋಡುಕನಸೊಂದು ಬಿದ್ದಿತ್ತು. ಬೆಳಗಿನ ಜಾವ ನಂಗೆ ಸಕ್ರೆ ನಿದ್ದೆ ಸಮಯ. ನೀನು ಎಬ್ಬುಸ್ತನೇ ಇರ್ತೀಯಾನಾನು ಮಲ್ಗೇ ಇರ್ತೀನಿ. ಎದ್ದೇಳೋ ಟೈಮಾಯ್ತುಆಫೀಸ್ಗೋಗಲ್ವಾನಿನ್ನದು ಏರು ದನಿಯಲ್ದಿದ್ರೂ ಕಿವಿ ಹತ್ರನೇ ಬಂದು ಕೂಗಿದ್ರೆ ಕಿರ್ಚ್ದಂಗನ್ಸಲ್ವಾನಾನು ಹೊದಿಕೆ ಎಳ್ಕೊಂಡ್ ಮಲ್ಕೋಬೇಕುಇನ್ನು ಹತ್ತಿರ ಬಂದು ಕಿವಿ ಕಚ್ಚಿಬಿಟ್ಟೆ. ಅಷ್ಟ್ರಲ್ಲಿ ಹಾಳಾದ್ದು ನಿದ್ದೆ ಬಂದುಬಿಡ್ತು. ನೀನು ಮತ್ತೆ ನನ್ನೊಳ ಸೇರಿ ಹೋದೆ. ಆಮೇಲೆನಿದ್ದೆಯೆಂದರೆ ಸವಿ ನಿದ್ದೆನಿನ್ನೊಲವ ಕನಸುಗಳೇ ಜೋಲಿ.

ಎಂದಿಗೂ ನಿನ್ನವನೇ ಆದ,
ಪ್ರಸಾದ್ (ನಿನ್ನ ಮೈಸೂರು)

ಒಲುಮೆಯ ಮುದ್ದುವಿಗೆ: ಪತ್ರ - ೨


ಪತ್ರ - ೨
--------------

ಒಲುಮೆಯ ಮುದ್ದುಗೆ,

ಮೊನ್ನೆ ಏನಾಯ್ತು ಗೊತ್ತಾನಿಮ್ಮನೆ ಹಾದಿಲಿ ನಡ್ಕೊಂಡ್ ಬರ್ತಿದ್ದೆ. ಬೆಳದಿಂಗಳ ಮುಂಜಾನೆತಣ್ಣನೆಯ ಬೆಳಗಿನ ಜಾವಚುಮು ಚುಮು ಚಳಿ. ಕಂಡಷ್ಟಗಲದ ಆಕಾಶಕ್ಕೆ ತಾನೊಬ್ಬನೆ ಸುಂದ್ರ ಅನ್ನೋ ಥರ ನಗ್ತಾ ಇದ್ದ ಚಂದಿರ. ಅರೆರೇ ಬೆಳಗಿನ ಜಾವಕ್ಕೂ ಇದ್ದಾನಲ್ಲಾ ಪೋಲಿನಿನ್ನ ಕದಿಯುವ ಸಾಹಸಕ್ಕೆ ಕೈಹಾಕಿರಬಹುದೇ ಅಂತ ಅನುಮಾನ ಬಂತು. ಆದರೆ ನೀನು ನನ್ನವಳೆಂಬ ಆಸರೆಯೊಂದೇ ನನ್ನ ಮುಂದುವರೆಯುವಂತೆ ಮಾಡಿದ್ದು. ಹಾಲ್ನೊರೆ ಉಕ್ಕುಕ್ಕಿ ಭೂಮಿಯ ಮೇಲೆಲ್ಲಾ ಸುರೀತಿದ್ದ. ನಂಗೆ ಆಶ್ಚರ್ಯವೋ ಆಶ್ಚರ್ಯ! ಅಲ್ಲಾ ಇಷ್ಟೆಲ್ಲಾ ಹಾಲ್ನೊರೆ ಸುರೀತಿದ್ದಾನೆ, ’ನಂದಿನಿ ಡೈರಿಯವ್ರು ಹಾಲಿನ್ ರೇಟ್ ಕಮ್ಮಿ ಮಾಡ್ತಾರ ಅಂತ.

ನಾನು ಮುಂದಡಿ ಇಟ್ಟಂತೆಲ್ಲಾ ಅವ್ನೂ ಓಡ್ತಿದ್ದ. ಎಲಾ ಇವ್ನಾ ಯಾಕೋ ಓಡ್ತೀಯಾ ಅಂತ ಅಟ್ಟುಸ್ಕೊಂಡ್ ಹೋದೆ. ನಿಮ್ಮನೆಯಿಂದ ಆ ಗಣಪತಿ ದೇವಸ್ಥಾನ ದಾಟಿಅದ್ರು ಎದುರಿಗಿನ ಪಾರ್ಕು ದಾಟಿಉದ್ದುದ್ದ ರಸ್ತೆ ಬಿಟ್ಟು ಅಂಕುಡೊಂಕನ್ನೆ ಬಳಸುತಾನೆ. ನನ್ಗೂ ಮಾರ್ನಿಂಗ್ ಜಾಗ್ ಆದೀತೆಂದು ಓಡಿದೆಓಡಿದೆ. ಎದುರಿಗೆ ರಾಘವೇಂದ್ರ ಕನ್ವೆನ್ಶನ್ ಹಾಲ್ ಸಿಕ್ತು. ಮೇಲ್ ನೋಡಿದ್ರೆ ಅವ ಇಲ್ಲ. ನನಗೆ ದಾರಿ ಬಿಟ್ಟು ಓಡಿ ಹೋಗಿದ್ದ. ಸಾಕಷ್ಟು ಕನಸುಗಳನ್ನು ಕೊಟ್ಟು.

ನಾನೀಗಅವನ ಮೇಲೆ ನನಗ್ಯಾಕಿಷ್ಟು ಅಸೂಯೆಅವ ನಿನ್ನ ನಿಜಕ್ಕೂ ಕದೀತಿದ್ನಅವನಿಗಷ್ಟು ಧೈರ್ಯವೇನನ್ನ ನಾನೇ ಪ್ರಶ್ನಿಸಿಕೊಳ್ತೇನೆ. ಇಲ್ಲ ಇಲ್ಲ.. ನೀನು ನನ್ನವಳೆಂದುನಾನು ನಿನ್ನವನೆಂದು ನಮ್ಮೆದೆಗಳ ಮೇಲೆ ಕೆತ್ತಿಟ್ಟಾಗಿದೆ! ಆದರೂ ನನಗ್ಯಾಕೆ ನಿನ್ನ ಕಳೆದುಕೊಳ್ಳುವ ಭಯಈ ಬೆಳಗಿನ ಜಾವಕ್ಕೆ ಈ ಪ್ರಶ್ನೆಯೊಂದು ನನ್ನನ್ಯಾಕೆ ನನ್ನಿಂದ ಕಸಿಯುತಿದೆಯೋಚಿಸುತ್ತಾ ಕೂತಿದ್ದೆ. ಆಗ ಹೊಳೆಯಿತುಈ ಥರ ಅನುಭವಿಸಿದ್ದ ಯಾವನೋ ಪುಣ್ಯಾತ್ಮ ಹೇಳಿದ್ದ, "ಶೀ ವಿಲ್ ನೆವರ್ ಬಿ ಯುವರ್ಸ್ಅಂಟಿಲ್ ಯೂ ಫೀಲ್ ಜಲಸ್". ಹೌದುಒಂದು ಕ್ಷಣಕ್ಕೂ ನಾನಿನ್ನ ಕಳೆದುಕೊಳ್ಳಲಾರೆ. ಆ ಚಂದಿರನಂತು ಮಳ್ಳಅಮಾವಾಸ್ಯೆಗೂ ಬೆಳದಿಂಗಳಾಚರಿಸುವ ಅತಿ ಆಸೆಗೆ ಸದಾ ಜಿನುಗುವ ನಿನ್ನ ಕಣ್ಣ ಹೊಳಪ ಕದ್ದೊಯ್ದು ಬಿಡುತ್ತಾನೆ. ನಾನಂತೂ ಸದಾ ಕಾವಲಿಗಿದ್ದೇನೆದೀಪಗಳನೇ ಖರೀದಿಸದ ನನಗೆ ನಿನ್ನ ಕಣ್ಣ ಹೊಳಪಷ್ಟೇ ಆಸರೆ.

ಎಂದಿಗೂ ನಿನ್ನವನೇ ಆದ,
ಪ್ರಸಾದ್ (ನಿನ್ನ ಮೈಸೂರು)

Sunday 12 April 2015

ಒಲುಮೆಯ ಮುದ್ದುವಿಗೆ: ಪತ್ರ - ೧


ಪತ್ರ - ೧
--------

ಒಲುಮೆಯ ಮುದ್ದುಗೆ,

ನಿಂಗೆ ನನ್ ಪತ್ರ ಅರ್ಥವಾಗುತ್ತೋ, ನಿದ್ರೆನೇ ಬರಿಸುತ್ತೋ ಅನ್ನೋ ಭಯಗಳನ್ನು ಮೀರಿ ಪತ್ರ ಬರೀತಿದ್ದೀನಿ ಸಹಿಸ್ಕೊ. ನಿದ್ರೆ ಬಂದ್ರೆ ತಾಚಿ ಮಾಡು, ನನ್ನ ಪತ್ರ ನಿನ್ನ ತಟ್ಟಿ ಮಲಗಿಸುತ್ತೆ.

ನಿನ್ಜೊತೆ ಅಷ್ಟು ಕೊರೀತೀನಿ, ಆದ್ರೂ ಯಾಕ್ ಪತ್ರ ಬರೀತಿದ್ದೀನಿ ಅಂತ ಆಶ್ಚರ್ಯ ಅಲ್ವಾ? ನಂಗೊತ್ತು! ಇವೆಲ್ಲಾ ನನ್ನೆದೆಯ ಪಿಸುಮಾತುಗಳು. ಕಿವಿಯಲ್ಲಷ್ಟೇ ಪಿಸುಗುಟ್ಟುವ ನನ್ನೊಲವ ಗುಟ್ಟುಗಳು. ನನ್ನೊಳಗೆ ಕುಡಿಯೊಡೆವ ಕನಸುಗಳು, ನಿನಗಾಗಿ ಕಾತರಿಸಿದ ಕ್ಷಣಗಳು, ನಿನಗಾಗಿ ಕಾದಿರುವ ನಾನು, ನನ್ನ ಜಗತ್ತು, ನೀನು, ನಿನ್ನ ಜಗತ್ತು, ಎಲ್ಲವನ್ನೂ ಅಕ್ಷರಕ್ಕಿಳಿಸುತ್ತಿದ್ದೇನೆ. ನಿನ್ನೊಲವ ನೈವೇದ್ಯಕ್ಕೆ ಮುಡಿಪಿಡುತ್ತಿದ್ದೇನೆ.

ಇದೇ ರೀತಿ ಫೆಬ್ರವರಿ ೧೪ರ ವರೆಗೂ ಒಂದಷ್ಟು ಪತ್ರಗಳು ನಿನ್ನನ್ನು ತಲುಪಲಿವೆ. ಅದರಲ್ಲಿ ಕಿವಿಗೊಟ್ಟರಷ್ಟೇ ಕೇಳಿಸುವ ಎದೆಬಡಿತಗಳಿವೆ.

ಹೆಣ್ಣಿನ ಪ್ರೀತಿ ಮತ್ತು ಮನಸ್ಸುಗಳು ಸಮುದ್ರಕ್ಕಿಂತ ಆಳ ಮತ್ತು ನಿಶ್ಚಲವಂತೆ. ನಾವೇ(ಗಂಡಸರು) ನದಿಗಳು, ಚಲನೆಯನ್ನೇ ಪ್ರೀತಿ ಎಂದು ನಂಬಿರುತ್ತೇವೆ. ಅಂಕು, ಡೊಂಕೆನ್ನದೆ ಚಲಿಸುತ್ತಲೇ ಇರುತ್ತೇವೆ. ನೀನು ಸಿಕ್ಕ ಮೇಲೆಯೇ ನನಗಿದರರ್ಥವಾಗುತ್ತಿದೆ. ನಿನ್ನೊಲವೊಳಗೆ ಕರಗಿದಷ್ಟೂ ನಿನಗಿಷ್ಟದ ರುಚಿ ಪಡೆದು ಭೋರ್ಗರೆದು ಉಕ್ಕುತ್ತಿದ್ದೇನೆ, ನಾನಾಗೇ ಉಳಿಯುತ್ತಿದ್ದೇನೆ. ನಿನ್ನ ತೀರ ತಾಕುವವರೆಗೂ ಹೀಗೇ ಇರುತ್ತೇನೆ, ತಾಕಿದ ಮೇಲೂ ಹೀಗೇ ಇರುತ್ತೇನೆ. ನಾನಿರುವಂತೆಯೇ ಒಪ್ಪಿಕೊಂಡು ಅಪ್ಪಿಕೊಂಡಿರುವ ನಿನಗೆ ಋಣಿಯಾಗಿದ್ದೇನೆ.

ಎಂದಿಗೂ ನಿನ್ನವನೇ ಆದ,
ಪ್ರಸಾದ್ (ನಿನ್ನ ಮೈಸೂರು)


ಪ್ರೇಮಿಗಳ ದಿನದ ವಿಶೇಷಕ್ಕೆ ಬರೆದ ಒಂದಷ್ಟು ಪತ್ರಗಳು, ಫೆಬ್ರವರಿ ತಿಂಗಳಲ್ಲಿ...

Saturday 4 April 2015

ಪದ್ಯದ ಹಣತೆಗಳು


ಪದ್ಯದ ಹಣತೆಗಳು
ಮೆರವಣಿಗೆ ಹೊರಟಿವೆ,
ಹಿಡಿದವರಿಗೆ ಹಿಡಿಯಷ್ಟು,
ಕೊಂಡವರಿಗೆ ಕೊಡದಷ್ಟು,
ಹಿಡಿಗೂ ಸಿಕ್ಕದ,
ಕೊಡಕೂ ದಕ್ಕದ,
ನೋಡು, ನೋಡಲ್ಲಿ
ಪದ್ಯದ ಹಣತೆಗಳು!

ಕಲ್ಯಾಣಿಯಲಿ ಮೀಯದ
ದೀಪಗಳ ಸಾಲು ಸಾಲು
ಭಕುತಿಗೆ ಒಲಿಯದ ಬೆಳಕು,
ನೀಲಗಾರರ ಕಂಠಕ್ಕೆ,
ಮಂಟೆಸ್ವಾಮಿಯ ಪಾದಕ್ಕೆ,
ಮಾದಪ್ಪನ ಗದ್ದುಗೆಗೆ,
ಜನಪದರ ತಂಬೂರಿಗೆ,
ದಿಗ್ಗನೆ ಹತ್ತಿಕೊಂಡು
ಉರಿದಿವೆ,
ಪದ್ಯದ ಹಣತೆಗಳು
ಸರತಿ ಸಾಲಲ್ಲಿ
ಮೆರವಣಿಗೆ ಹೊರಟಿವೆ!

ಪದಗಳಲಿ ಶಬ್ಧ ಮಾಡಿ,
ಭಾವಗಳಲಿ ಶುದ್ಧ ಮಾಡಿ,
ಶೃತಿಗೆ ಬೇಡುವ
ಮಾನವೀಯತೆಯ ದೀಪದೊಳಗೆ
ಲೇಖನಿಯ ಬತ್ತಿ ಹಿಡಿದು
ಮೆರವಣಿಗೆ ಹೊರಟಿವೆ,
ಪದ್ಯದ ಹಣತೆಗಳು!

- ಮಂಜಿನ ಹನಿ

ಚಿತ್ರ ಕೃಪೆ: ಮದನ್.ಸಿ.ಪಿ.